ಈ ನಿರಂಕುಶ ಕ್ರೂರ ಕಾಲನನು ಇದಕಿಂತ
ಧೀರನೆಲೆಯಲಿ ನೀನು ಕಾದದಿರುವುದು ಏಕೆ ?
ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ
ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ?
ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ,
ಮದುವೆಯಾಗದ ಎಷ್ಟೊ ಕನ್ನೆಯುದ್ಯಾನಗಳು
ನಿನ್ನ ಚಿತ್ರಕ್ಕಿಂತ ಘನವಾದ ಜೀವಂತ
ಕುಸುಮಗಳೆ ನಿನಗೆ ತಳೆಯಲು ಕಾಯುತಿರುವುವು.
ನಿನ್ನ ಹೊರ ಚೆಲುವು, ನಿನ್ನಂತರಂಗದ ಕಿರಣ
ನಿನ್ನ ಚಿತ್ರದಲಿ, ಪಳಗದ ನನ್ನ ಪೆನ್ನಲ್ಲಿ
ಬಣ್ಣಿಸಬರದ ಹಾಗೆ ಜೀವದೆಳೆಗಳು ನಿನ್ನ
ಜೀವಂತ ನಿಲಿಸುವುವು ಜನರ ಕಣ್ಣುಗಳಲ್ಲಿ.
ಕೊಡುವ ಕ್ರಿಯೆಯಿಂದಲೇ ನಿನ್ನ ನೀ ಪಡೆಯುವುದು
ನೀ ಬರೆವ ಕುಶಲ ಚಿತ್ತದೊಳೆ ನೀನುಳಿಯುವುದು.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 16
But wherefore do not you a mightier way
Related Post
ಸಣ್ಣ ಕತೆ
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…